ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಸಮೀಪ ಒಂದು ಸ್ಮಶಾನವಿತ್ತು. ಇದನ್ನು ಸರ್ಕಾರಿ ದಾಖಲೆಗಳೂ ಸ್ಮಶಾನವೆಂದೇ ಗುರುತಿಸಿದ್ದೆವು. ಜ್ಞಾನಭಾರತಿ ಕ್ಯಾಂಪಸ್ ಆದ ಮೇಲೆ ಅದರ ಸುತ್ತಮುತ್ತೆಲ್ಲಾ ಮನೆಗಳು ಬಂದವು. ಅಲ್ಲಿ ಸ್ಮಶಾನ ಬೇಡ ಎಂಬ ಮಾತುಗಳು ಕೇಳಿಬಂದವು. ಅದನ್ನು ಬೇರೆಯೇ ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಉಪಾಯಗಳ ಕುರಿತು ಸಲಹೆಗಳೂ ಬರತೊಡಗಿದವು. ಈ ಹೊತ್ತಿಗೆ ಸರಿಯಾಗಿ ಇಬ್ಬರು ಅಲ್ಲಿರುವ ಸ್ಮಶಾನ ಭೂಮಿ ತಮ್ಮದು ಎಂದರು. ಇಬ್ಬರ ಬಳಿಯೂ ಸ್ಮಶಾನ ಅವರ ಹೆಸರಿನಲ್ಲಿ ಇರುವುದಕ್ಕೆ ದಾಖಲೆಯಾಗಿ ಪಹಣಿ ಅಥವಾ ಆರ್ಟಿಸಿಗಳಿದ್ದವು. ಇಬ್ಬರೂ…